ದಾಂಡೇಲಿಯಲ್ಲಿ ರಾಷ್ಟ್ರಜಾಗೃತಿ ಮೂಡಿಸಿದ ಆಟೋ ಚಾಲಕರ ಮೆರವಣಿಗೆ

ದಾಂಡೇಲಿ : ಎಲ್ಲಾ ಹಬ್ಬ, ಹರಿದಿನ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಗೌರವ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ದಾಂಡೇಲಿಯ ಆಟೋ ಚಾಲಕರು ದೇಶದ ಹೆಮ್ಮೆ ಮತ್ತು ಘನತೆಯ ಪ್ರತೀಕವಾದ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದು ಐತಿಹಾಸಿಕ ಸಾಧನೆಯನ್ನು ಮಾಡಿದ ಹಿನ್ನೆಲೆಯಲ್ಲಿ ನಗರದ ಆಟೋ ರಿಕ್ಷಾಗಳ ಭವ್ಯವಾದ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನೂರಕ್ಕೂ ಹೆಚ್ಚು ಆಟೋಗಳು ಮೆರವಣಿಗೆಗೆ ಶೋಭೆಯನ್ನು ತಂದರೆ, ಇತ್ತ ಆಟೋ ಚಾಲಕರ ಈ ಮೆರವಣಿಗೆ ನಗರದಲ್ಲಿ ರಾಷ್ಟ್ರ ಜಾಗೃತಿಯನ್ನು ಮೂಡಿಸಿತು.