ದಾಂಡೇಲಿ ನಗರದಲ್ಲಿ ಆರ್.ಎ.ಎಫ್ ಮತ್ತು ಪೊಲೀಸ್ ಸಿಬ್ಬಂದಿಗಳಿಂದ ಪಥ ಸಂಚಲನ

ದಾಂಡೇಲಿ : ಆರ್.ಎ.ಎಫ್ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಶಾಂತಿ ಸುವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನವನ್ನು ಇಂದು ಮಂಗಳವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿತ್ತು.

ಕಾನೂನು ಸುವ್ಯವಸ್ಥೆ ಹಾಗೂ ಕೋಮು ಭಾವನೆಗೆ ಧಕ್ಕೆ ತರುವಂತಹ ಯಾವುದೇ ಪ್ರಕರಣಗಳು ಸಂಭವಿಸದಂತೆ ಕೇಂದ್ರದ ಗೃಹ ಇಲಾಖೆಯ ಸೂಚನೆಯ ಮೇರೆಗೆ ಆರ್.ಎ.ಎಫ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡದಿಂದ ಈ ಜಾಥಾ ನಡೆಯಿತು. ನಗರದ ಪೊಲೀಸ್ ಠಾಣೆಯ ಆವರಣದಿಂದ ಆರಂಭಗೊಂಡ ಜಾಥಾವು ನಗರದ ಸುಭಾಷ್ ನಗರ, ಆಜಾದ್ ನಗರ, ಅಂಬೇವಾಡಿ, ವನಶ್ರೀನಗರ, ಗಾಂಧಿನಗರ, ಮಾರುತಿ ನಗರ, ಟೌನಶಿಪ್, ಜೆ.ಎನ್.ರಸ್ತೆ, ಹಳೆದಾಂಡೇಲಿ, ಕುಳಗಿ ರಸ್ತೆ, ಹಳಿಯಾಳ ರಸ್ತೆ, ಬರ್ಚಿ ರಸ್ತೆ ಸೇರಿದಂತೆ ಮೊದಲಾದ ಕಡೆಗಳಲ್ಲಿ ಸಂಚರಿಸಿತು.