ಸಹಕಾರಿ ಧುರೀಣ ಶಂಕರಗೌಡ ಪಾಟೀಲ್ ಭೇಟಿ


ಸಿದ್ದಾಪುರ : ಹಿರಿಯ ಸಹಕಾರಿ ಧುರೀಣ ಶಂಕರಗೌಡ ಪಾಟೀಲ್ ಬೈಲಹೊಂಗಲರವರು ಸ್ಥಳೀಯ ಟಿ.ಎಂ.ಎಸ್ ಸಿದ್ದಾಪುರಕ್ಕೆ ಭೇಟಿ ನೀಡಿ ,ಸಂಘದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು. ಟಿ.ಎಂಎಸ್ ಕಾರ್ಯಚಟುವಟಿಕೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅವರು ಮಾತನಾಡಿ ಶಂಕರಗೌಡ ಪಾಟೀಲ್ ರವರು ಸಹಕಾರ ಮಾರಾಟ ಮಹಾಮಂಡಳ , ಕೆ.ಎಂ.ಎಫ್ , ಎಸ್.ಎಲ್.ಡಿ.ಬ್ಯಾಂಕ್‌ಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಸಹಕಾರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿ ಸಂಘದ ಪರವಾಗಿ ಸನ್ಮಾನಿಸಿದರು.
ಅವರ ಜೊತೆ ಬೈಲಹೊಂಗಲ ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಶಿವಜಾತಗೌಡ ಪಾಟೀಲ್ ಹಾಗೂ ಟಿ.ಎಂ.ಎಸ್ ವ್ಯವಸ್ಥಾಪಕ ಸತೀಶ್ ಹೆಗಡೆ ಹೆಗ್ಗಾರಕೈ ಉಪಸ್ಥಿತರಿದ್ದರು.