ಇಂದು ಸಂಜೆ ದಾಂಡೇಲಿಗೆ ಭೇಟಿ‌ ನೀಡಲಿರುವ ಶ್ರೀಶೈಲ ಜಗದ್ಗುರು ಡಾ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

ದಾಂಡೇಲಿ : ಶ್ರೀಶೈಲ ಜಗದ್ಗುರು ಡಾ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಶುಕ್ರವಾರ ಸಂಜೆ 5 ಗಂಟೆಗೆ ದಾಂಡೇಲಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ನಗರದ ಪಟೇಲ್ ವೃತ್ತದ ಹತ್ತಿರವಿರುವ ಶ್ರೀ.ಬಸವೇಶ್ವರ ಮೂರ್ತಿಯ ದರ್ಶನವನ್ನು ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಶ್ರೀ.ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿ ವಿನಂತಿಸಿದೆ