ಹಳಿಯಾಳ-ದಾಂಡೇಲಿ ತಾಲ್ಲೂಕಿನಲ್ಲಿ ಚುರುಕುಗೊಂಡ ಕೃಷಿ ಕಾಯಕ

ಹಳಿಯಾಳ : ಕಳೆದ ಒಂದು ವಾರ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಳಿಯಾಳ-ದಾಂಡೇಲಿ ತಾಲ್ಲೂಕಿನ ರೈತರು ಹೈರಾಣಗೊಂಡಿದ್ದರು. ಇದೀಗ ಕಳೆದೆರಡು ದಿನಗಳಿಂದ ವರುಣ ಶಾಂತಚಿತ್ತನಾದ ಹಿನ್ನಲೆಯಲ್ಲಿ ಇಂದು ಭತ್ತದ ವ್ಯವಸಾಯ ಚುರುಕುಗೊಂಡಿದೆ. ಭತ್ತದ ನಾಟಿ ಕಾರ್ಯಕ್ಕೆ ಗದ್ದೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಗದ್ದೆಯನ್ನು ಹದ ಮಾಡುವ ಕಾರ್ಯ ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನೆಲ್ಲೆಡೆ ಇಂದು ಸಾಮಾನ್ಯವಾಗಿ ಕಂಡುಬಂದಿದೆ.