ಹಳೆದಾಂಡೇಲಿಯಲ್ಲಿ ಧರೆಗುರುಳಿದ ಮರ- ಎರಡು ಮನೆಗಳಿಗೆ ಹಾನಿ- ಮುರಿದು ಬಿದ್ದು ವಿದ್ಯುತ್ ಕಂಬ

ದಾಂಡೇಲಿ : ನಗರದಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಹಳೆದಾಂಡೇಲಿಯ ಸ್ವಾಮಿಲ್ ಚಾಳದ ಹತ್ತಿರ ಮರವೊಂದು ಧರೆಗುರುಳಿ ಎರಡು ಮನೆಗಳಿಗೆ ಮತ್ತು ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಶುಕ್ರವಾರ ನಡೆದಿದೆ.

ಘಟನೆ ನಡೆದ ತಕ್ಷಣ ಹೆಸ್ಕಾಂನವರು ಸ್ಥಳಕ್ಕಾಗಮಿಸಿ, ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಿ, ವಿದ್ಯುತ್ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ. ಇತ್ತ ಸ್ಥಳಕ್ಕೆ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.