ಭುವನಗಿರಿಯ ಶ್ರೀ ಭುವನೇಶ್ವರಿ ಸನ್ನಿಧಿಯಲ್ಲಿ ” ಶ್ರೀ ಮಾತಾ ವೈಭವ” ಎಂಬ ಉಪನ್ಯಾಸ ಕಾರ್ಯಕ್ರಮ

ಸಿದ್ದಾಪುರ. ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ಸನ್ನಿಧಿಯಲ್ಲಿ ಸುಷಿರ ಸಂಗೀತ ಪರಿವಾರ ಕಲ್ಲಾರೆಮನೆ ಮತ್ತು ಶ್ರೀ ಭುವನೇಶ್ವರಿ ದೇವಾಲಯ ಭುವನಗಿರಿ ಇವರ ಸಯುಕ್ತ ಆಶ್ರಯದಲ್ಲಿನಡೆಯುತ್ತಿರುವ ” ಶ್ರೀ ಮಾತಾ ವೈಭವ” ಎಂಬ ಉಪನ್ಯಾಸ ಕಾರ್ಯಕ್ರಮದ ಮೂರನೇ ದಿನ ವಿ. ಅನಂತಮೂರ್ತಿ ಭಟ್ಟ ಯಲುಗಾರು ಇವರು ಶ್ರೀ ಶಂಕರರ ಸ್ತೋತ್ರಗಳಲ್ಲಿ ಶ್ರೀಮಾತೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಸ್ವರೂಪಿಯಾಗಿ ಶಂಕರರು ಮಾತೆಯನ್ನು ಕಂಡು ಸ್ತುತಿಸಿದ ಸ್ತೋತ್ರಗಳ ತಾತ್ಪರ್ಯವನ್ನು ವಿವರಿಸಿ ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂಬ ಮಾರ್ಗವನ್ನು ವಿವರಿಸಿದರು.
ಗಣಪತಿ ಹೆಗಡೆ ಪರಿಚಯಿಸಿ ಸ್ವಾಗತಿಸಿದರು.
ಶ್ರೀಕಾಂತ್ ಹೆಗಡೆ ವಂದಿಸಿದರು.
ಗಣಪತಿ ಹೆಗಡೆ ಗುಂಜಗೋಡ ದಂಪತಿಗಳು ಗೌರವಿಸಿದರು.
ಶಂಕರ ಮಠದ ಧರ್ಮಾಧಿಕಾರಿಗಳಾದ ವಿಜಯ ಹೆಗಡೆ ದೊಡ್ಮನೆ ದಂಪತಿಗಳು, ಸುಷಿರ ಸಂಗೀತ ಪರಿವಾರದ ನಾರಾಯಣ ಹೆಗಡೆ ಕಲ್ಲಾರೆಮನೆ ಮುಂತಾದವರು ಉಪಸ್ಥಿತರಿದ್ದರು.