ಹಳಿಯಾಳದಲ್ಲಿ ಮೇಳೈಸಿದ ಶಿವಶಕ್ತಿ ಪಂಜುರ್ಲಿ ಯಕ್ಷಗಾನ ಪ್ರದರ್ಶನ

ಹಳಿಯಾಳ : ತಾಲ್ಲೂಕಿನ ಯಕ್ಷಗಾನ ಪ್ರೇಮಿಗಳ ಆಶ್ರಯದಡಿ ಶ್ರೀ.ಹಟ್ಟಿಯಂಗಡಿ ಮೇಳದವರಿಂದ ಪಟ್ಟಣದ ಮರಾಠಾ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶಿವಶಕ್ತಿ ಪಂಜುರ್ಲಿ ಎಂಬ ಯಕ್ಷಗಾನ ಪ್ರದರ್ಶನವು ಅತ್ಯಾಕರ್ಷಕವಾಗಿ ನಡೆದು ಎಲ್ಲರ ಮನರಂಜಿಸುವಲ್ಲಿ ಯಶಸ್ವಿಯಾಯ್ತು.

ಹಿಮ್ಮೇಳನದಲ್ಲಿ ರವಿ ಶೆಟ್ಟಿ ಹೊಸಂಗಡಿ, ಸುಧೀರ್ ಭಟ್ ಪೆರ್ಡೂರ್, ಮಂಜುನಾಥ ನಾವುಡ, ಎನ್.ಜಿ.ಹೆಗಡೆ ಯಲ್ಲಾಪುರ ಇವರು ಯಕ್ಷಗಾನ ಪ್ರದರ್ಶನಕ್ಕೆ ಕಳೆ ತಂದುಕೊಟ್ಟರೇ ಇತ್ತ ಮುಮ್ಮೇಳನದಲ್ಲಿ ಶ್ರೀಧರ್ ಕಾಂಚನ್, ಶಿಥಿಲ್ ಶೆಟ್ಟಿ ಐರ್ಬೈಲ್, ಯುವರಾಜ ನಾಯ್ಕ, ಧನರಾಜ್ ಹೆಮ್ಮಾಡಿ, ರಾಜೇಶ್ ಆಚಾರ್ಯ, ಶ್ರೇಯಸ್, ಮಂಜು ಕಮಲಶಿಲೆ, ಉಮೇಶ್ ಶಂಕರನಾರಾಯಣ, ಗಣೇಶ್ ದೇವಾಡಿಗ ಅವರು ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಮೆರುಗು ತಂದುಕೊಟ್ಟರು. ಹಾಸ್ಯಾದರಸ ಎಂದೆ ಜನಖ್ಯಾತಿ ಪಡೆದ ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ದ್ವಿತೇಶ್ ಕಾಮತ್ ಅವರುಗಳ ಪಂಚಿಂಗ್ ಡೈಲಾಗ್ಸ್ ಗಳು ಹಾಸ್ಯದ ಜೊತೆಗೆ ಸಾಮಾಜಿಕವಾದ ಜಾಗೃತಿಯನ್ನು ಮೂಡಿಸಿತು.

ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಪ್ರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.