ಸಿದ್ದಾಪುರ : ಬಡಾಳ ಘಾಟ್ ನಲ್ಲಿ ರಸ್ತೆಗೆ ಉರುಳಿ ಬಿದ್ದ ಮರ – ಸಂಚಾರ ಅಸ್ಥವ್ಯಸ್ಥ

ಸಿದ್ದಾಪುರ : ತಾಲೂಕಿನ ಕುಮಟಾ ಸಿದ್ದಾಪುರ ಮುಖ್ಯ ರಸ್ತೆಯ ಬಡಾಳ ಘಾಟ್ ನಲ್ಲಿ ರಸ್ತೆಗೆ ಮರವು ಉರುಳಿ ಬಿದ್ದ ಪರಿಣಾಮವಾಗಿ ಶನಿವಾರ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ದೃಶ್ಯ ಕಂಡು ಬಂದಿತು
ಬಿಸುತ್ತಿರುವ ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಮರವು ರಸ್ತೆಗೆ ಉರುಳಿ ಬಿದ್ದು ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು
ಬದಲಿ ರಸ್ತೆ ಇಲ್ಲದೆ ಇರುವುದರಿಂದ ಮರ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವವರೆಗೂ ವಾಹನ ಸವಾರರು ಅಲ್ಲೇ ನಿಂತು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಯಿತು
ಮರ ಬಿದ್ದು ಸಂಚಾರ ಕ್ಕೆ ಅಡಚಣೆ ಉಂಟಾದ ವಿಷಯ ತಿಳಿದ ಇಲಾಖೆ ಅಧಿಕಾರಿಗಳು, ಸ್ಥಳದಲ್ಲಿದ್ದ ವಾಹನ ಚಾಲಕರು, ಪ್ರಯಾಣಿಕರು ರಸ್ತೆಗೆ ಬಿದ್ದ ಮರವನ್ನ ತೆರವುಗೊಳಿಸಿಕೊಂಡು ವಾಹನ ಸಂಚರಿಸಲು ಅನುಕೂಲ ಮಾಡಿಕೊಟ್ಟ ಘಟನೆ ನಡೆಯಿತು ಇವರ ಕಾರ್ಯ ಕ್ಕೆ ಸಹ ಪ್ರಯಾಣಿಕರು ಧನ್ಯವಾದ ತಿಳಿಸಿ ಮಾಧ್ಯಮ ಕ್ಕೆ ಮಾಹಿತಿ ನೀಡಿದ್ದಾರೆ

ಇನ್ನು ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಾಳೆಸರದಲ್ಲಿ ಬಚ್ಚಲು ಮನೆ ಮೇಲೆ ಹಲಸಿನ ಮರ ಬಿದ್ದು ಹಾನಿಯಾಗಿದೆ 

  ನೇತ್ರಾವತಿ ಕೆರಿಯಾ ಗೌಡ ಬಾಳೆಸರ ಇವರ ವಾಸದ ಮನೆಯ ಹಿಂಬದಿಯ ಮಾಡಿ ಗೆ   ಹೊಂದಿಕೊಂಡಿರುವ ಬಚ್ಚಲುಮನೆಯ ಮೇಲೆ  ಹಲಸಿನ ಮರ ಬಿದ್ದು ಅಂದಾಜು 5000 ರೂ  ಹಾನಿ ಆಗಿದೆ ಘಟನೆಯಲ್ಲಿ  ಯಾವುದೇ ಜೀವ ಹಾನಿ ಆಗಿರುವುದಿಲ್ಲ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ