ಮಗನ ಹುಟ್ಟುಹಬ್ಬ ವನ್ನು ಆಶ್ರಮದಲ್ಲಿಅರ್ಥಪೂರ್ಣವಾಗಿ ಆಚರಿಸಿದ ಬ್ಲಾಕ್ ಕಾಂಗ್ರೆಸ್ ನ ಯುವ ಘಟಕದ ಅಧ್ಯಕ್ಷ ಪ್ರಶಾಂತ್ ನಾಯ್ಕ್ ದಂಪತಿಗಳು

ಸಿದ್ದಾಪುರ : ತಾಲೂಕ ಬ್ಲಾಕ್ ಕಾಂಗ್ರೆಸ್ ನ ಯುವ ಘಟಕದ ಅಧ್ಯಕ್ಷ ಪ್ರಶಾಂತ್ ನಾಯ್ಕ್ ದಂಪತಿಗಳು ತಮ್ಮ ಮಗನ ಐದನೇ ವರ್ಷದ ಹುಟ್ಟುಹಬ್ಬ ವನ್ನು ಆಶ್ರಮದಲ್ಲಿನ ಆಶ್ರಮ ವಾಸಿಗಳಿಗೆ ಊಟ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು
ತಾಲೂಕಿನ ಮುಗುದೂರ್ ನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ಕು. ರಿಷಿತ ನ ಐದನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು
ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಲಾಯಿತು
ಆಶ್ರಮವಾಸಿಗಳು ಪುಟ್ಟ ಕಂದನಿಗೆ ಶುಭ ಹಾರೈಸಿದರು ಆಶ್ರಮದ ಮುಖ್ಯಸ್ಥರು ಮೇಲ್ವಿಚಾರಕರು ಕುಟುಂಬಸ್ಥರಿಗೆ ಧನ್ಯವಾದ ತಿಳಿಸಿದರು