ಕೃಷಿ ಸಲಕರಣೆ ದಾಸ್ತಾನು ಇಟ್ಟಿದ್ದ ಮನೆಗೆ ಆಕಸ್ಮಿಕ ಬೆಂಕಿ ಲಕ್ಷಾಂತರ ರೂ ನಷ್ಟ


ಸಿದ್ದಾಪುರ : ಕೃಷಿ ಸಲಕರಣೆ ದಾಸ್ತಾನು ಇಟ್ಟಿದ್ದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವಾದ ಘಟನೆ ತಾಲೂಕಿನ ಹರಕನಳ್ಳಿ ಯಲ್ಲಿ ನಡೆದಿದೆ
ರಾಮಕೃಷ್ಣ ಕೆರಿಯ ನಾಯ್ಕ್ ಹರಕನಳ್ಳಿ ಇವರಿಗೆ ಸೇರಿದ ಮನೆಯಲ್ಲಿ ಗುರುವಾರ ಬೆಳಿಗ್ಗೆ ಸುಮಾರು 3 ಗಂಟೆಗೆ ಹೊತ್ತಿಗೆ ಘಟನೆ ನಡೆದಿದೆ ಎನ್ನಲಾಗಿದೆ
ಘಟನೆಯಿಂದಾಗಿ ಮನೆಯಲ್ಲಿ ಇಟ್ಟಿದ್ದ ಚಾಲಿ ಅಡಿಕೆ, ಕಾಳು ಮೆಣಸು, ಕೃಷಿ ಉಪಕರಣಗಳಾದ ಬುಟ್ಟಿ, ಕಲ್ಲಿ, ಅಡಿಕೆ ಬೇಯಿಸುವ ಹಂಡೆ ಮುಂತಾದ ಅಮೂಲ್ಯ ಕೃಷಿ ಉಪಕರಣಗಳು ಸುಟ್ಟು ಭಸ್ಮ ಆಗಿದೆ ಅಂದಾಜು 1 ಲಕ್ಷ ಕ್ಕೂ ಅಧಿಕ ನಷ್ಟ ಆಗಿದೆ ಎಂದು ತಿಳಿಸಿದ್ದಾರೆ
ಇಡೀ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಸುಟ್ಟು ನಾಶವಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ