ಚಿಕ್ಕೋಡಿಯ ಯಡೂರ ಮಠದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿಯಾದ ಹಳಿಯಾಳದ ಉದಯ ಹೂಲಿ ನೇತೃತ್ವದ ನಿಯೋಗ

ಹಳಿಯಾಳ : ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಹಳಿಯಾಳದ ಉದಯ ಹೂಲಿಯವರ ನೇತೃತ್ವದ ನಿಯೋಗ ಚಿಕ್ಕೋಡಿಯ ಯಡೂರ ಮಠದಲ್ಲಿ ಶ್ರೀಶೈಲ ಮಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿಯಾಗಿ, ಆ:05 ರಿಂದ 12 ರವರೆಗೆ ಜೋಯಿಡಾ ತಾಲ್ಲೂಕಿನ ಕುಂಬಾರವಾಡದ ಕಳಸಾಯಿಯಲ್ಲಿ ಹಮ್ಮಿಕೊಂಡಿರುವ ಶಿವಾಪೂಜಾನುಷ್ಟಾನ ಕಾರ್ಯಕ್ರಮದ ಅಹ್ವಾನ ಪತ್ರಿಕೆಯನ್ನು ನೀಡಿ, ಪೂಜ್ಯರನ್ನು ಭಕ್ತಿಪೂರ್ವಕವಾಗಿ ಸನ್ಮಾನಿಸಿದರು.

ಪೂಜ್ಯ ಸ್ವಾಮೀಜಿಯವರಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳು, ಕಾರ್ಯಕ್ರಮದ ರೂಪುರೇಷೆ, ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದ ಉದಯ ಹೂಲಿಯವರ ನೇತೃತ್ವದ ನಿಯೋಗದಲ್ಲಿ ವೀರಶೈವ ಲಿಂಗಾಯತ ಸಮಾಜದ ಪ್ರಮುಖರುಗಳಾದ ಶಿವದೇಸಾಯಿ ಸ್ವಾಮಿ, ಬಸವರಾಜ ಬೆಂಡಿಗೇರಿಮಠ, ಅಪಸಾಹೇಬ್ ಹುಂಡೇಕಾರ್, ವಿನಾಯಕ ಕಟ್ಟಿ, ಶಿವ ಗರಗ, ಮಂಜು ಮರಾಠೆ, ಪರಮೇಶ್ವರ ಕಾನಳಿಮಠ ಮೊದಲಾದವರು ಉಪಸ್ಥಿತರಿದ್ದರು.