ಹಳಿಯಾಳ : ಕಕ್ಷಿದಾರರೊಬ್ಬರಿಂದ ಹಲ್ಲೆಗೊಳಗಾಗಿ ಹಳಿಯಾಳ ಪಟ್ಟಣದಲ್ಲಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಳಿಯಾಳ ತಾಲ್ಲೂಕಿನ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿಯಾಗಿರುವ ಮಲ್ಲಿಕಾರ್ಜುನ್.ವಿ.ಅಷ್ಟೇಕರ್ ಅವರ ಆರೋಗ್ಯ ವಿಚಾರಿಸಲು ತಾಲ್ಲೂಕಿನ ನ್ಯಾಯವಾದಿಗಳ ನಿಯೋಗ ಭೇಟಿ ನೀಡಿ ಆರೋಗ್ಯ ಪರಿಶೀಲನೆಯನ್ನು ನಡೆಸಿದರು.
ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಲ್ಲಿಕಾರ್ಜುನ ಅಷ್ಟೇಕರ್ ಅವರಾರೋಗ್ಯ ವಿಚಾರಿಸಿದ ಬಳಿಕ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಮೇಶ್ ಕದಂ ಅವರಲ್ಲಿ ಮಾಹಿತಿಯನ್ನು ಪಡೆದುಕೊಂಡರು.