ತುಮಕೂರಿನಲ್ಲಿ ಗಮನ ಸೆಳೆದ ದಾಂಡೇಲಿಯ ಜೈತ್.ಸಿ.ಎಸ್

ದಾಂಡೇಲಿ :ನಗರದ ಖ್ಯಾತ ಕೊಳಲು ವಾದಕ ಹಾಗೂ ನಗರದ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜೈತ್.ಸಿ.ಎಸ್ ಈತನೂ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಳಲು ವಾದನವನ್ನು ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಗಮನ ಸೆಳೆದಿದ್ದಾನೆ.

ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೈತ್.ಸಿ.ಎಸ್ ಈತನೂ ಭಾಗವಹಿಸಿ ಕೊಳಲು ನುಡಿಸಿ ಅಪಾರ ಜನಾಕರ್ಷಣೆಗೆ ಪಾತ್ರನಾದನು.

ಕಾರ್ಯಕ್ರಮದ ಕೊನೆಯಲ್ಲಿ ಜೈತ್.ಸಿ.ಎಸ್ ಮತ್ತು ಆತನ ಸಾಧನೆಗೆ ಪ್ರೇರಣಾದಾಯಿಯಾದ ಆತನ ತಂದೆ ಸಂಗೀತ ಗುರು ಪಂ: ಚಂದ್ರಶೇಖರ್.ಎಸ್ ಅವರನ್ನು ಶ್ರೀದೇವಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವತಿಯಿಂದ ಸನ್ಮಾನಿಸಲಾಯ್ತು.