ಸಿದ್ದಾಪುರದ ಬಾಲಿಕೊಪ್ಪ ಶಾಲೆ ಎದುರು ಸೂಚನ ಫಲಕ, ಹಂಪ್ ಅಳವಡಿಸುವಂತೆ ಆಗ್ರಹ

ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಬಾಲಿಕೊಪ್ಪ ಶಾಲೆ ಎದುರಿನ ಚಂದ್ರಗುತ್ತಿ ಮುಖ್ಯ ರಸ್ತೆಯಲ್ಲಿ ವೇಗ ನಿಯಂತ್ರಣಕ್ಕೆ ಯಾವುದೇ ಸೂಚನ ಫಲಕ, ಹಂಪ್ ಇಲ್ಲ. ಇದರಿಂದ ಶಾಲೆಯ ಎದುರು ವಾಹನಗಳು ವೇಗವಾಗಿ ಸಂಚರಿಸುವುದರಿಂದ ವಿದ್ಯಾರ್ಥಿಗಳಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸೂಚನಾ ಫಲಕ, ಹಂಪ್ ಅಳವಡಿಸುವಂತೆ ಕಾಂಗ್ರೆಸ್ ಮುಖಂಡ ಎನ್ ಟಿ ನಾಯ್ಕ್ ದ್ಯಾವಾಸ ಆಗ್ರಹಿಸಿದ್ದಾರೆ…

ಶಾಲೆ ಆರಂಭ ಮತ್ತು ಮುಕ್ತಾಯ ಸಮಯದಲ್ಲಿ ಶಾಲೆಗೆ ಬರಲು ಮತ್ತು ಮನೆಗೆ ಹೋಗಲು ಓಡಾಡುವಾಗ ಅರಿವಿಲ್ಲದೆ ಮಕ್ಕಳು ಮುಖ್ಯ ರಸ್ತೆಗೆ ಬರ್ತಾರೆ. ಆಗ ಈ ರಸ್ತೆಯಲ್ಲಿ ಅಡೆ ತಡೆ ಇಲ್ಲದೆ ಇರುವುದರಿಂದ ವೇಗವಾಗಿ ಸಂಚರಿಸುವ ವಾಹನ ಗಳಿಂದ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆಯಿದೆ. ಕೂಡಲೇ ಸಂಬಂದಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಆಗುವ ಅನಾಹುತ ತಪ್ಪಿಸಬೇಕು. ಮತ್ತು ಈ ಶಾಲೆಯು ಮಾದರಿ ಶಾಲೆಯಾಗಿದ್ದು ಸರಿಯಾದಂತ ಸಮರ್ಪಕ ವ್ಯವಸ್ಥೆಗಳಿಲ್ಲ ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನ ಕಲ್ಪಿಸಿ ವಿದ್ಯಾರ್ಥಿ ಗಳ ಕಲಿಕೆಗೆ ಅವಕಾಶ ಒದಗಿಸುವಂತೆ ಎನ್‌ಟಿ ನಾಯ್ಕ ಆಗ್ರಹಿಸಿದ್ದಾರೆ…

ದಿವಾಕರ ನಾಯ್ಕ, ನುಡಿ ಸಿರಿ ನ್ಯೂಸ್‌, ಸಿದ್ದಾಪುರ