ಕುಮಟಾದ ಹೊನ್ನಮಾವ್‌ ಕ್ರಾಸ್‌ ಬಳಿ ಭೀಕರ ಅಪಘಾತ ಬೈಕ್‌ ಸವಾರ ಬಲಿ

ಕುಮಟಾ : ಹೊನ್ನಮಾವ್‌ ಕ್ರಾಸ್‌ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೊನ್ನಮಾವ್‌ ಕ್ರಾಸ್‌ ಬಳಿ ಬೈಕ್‌ಗೆ ಕಂಟೇನರ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರ ಗಣೇಶ್‌ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಗಣೇಶ್‌ ನಾಯ್ಕ ಕುಮಟಾದಲ್ಲಿ ಪಂಚರ್‌ ಗಣೇಶ್‌ ಅಂತಾನೇ ಗುರುತಿಸಿಕೊಂಡಿದ್ರು. ಕುಮಟಾದಲ್ಲಿ ಎಲ್ಲೇ ವಾಹನಗಳು ಪಂಚರ್‌ ಆದ್ರೂ, ಕೂಡಲೇ ಸ್ಥಳಕ್ಕೆ ಬಂದು ಗಣೇಶ್‌ ಪಂಚರ್‌ ತೆಗೆದುಕೊಡುತ್ತಿದ್ರು.