ಲಾರಿ ಡಿಕ್ಕಿ: ಬೈಕ್ ಸವಾರಗೆ ಗಂಭೀರ ಗಾಯ

ಕುಮಟಾ: ಚಲಿಸುತ್ತಿದ್ದ ಬೈಕ್ ಗೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಪಟ್ಟಣದ ರಾಮಲೀಲಾ ಆಸ್ಪತ್ರೆಯ ಎದುರಿನ ಹೆದ್ದಾರಿಯಲ್ಲಿ ನಡೆದಿದೆ. ಕಲ್ಲಬ್ಬೆ ಗ್ರಾಪಂ ವ್ಯಾಪ್ತಿಯ ಕೊಡವಳ್ಳಯ ನಾಗಾರ್ಜುನ ಸುಬ್ರಮಣ್ಯ ಶೆಟ್ಟಿ (28) ಗಂಭೀರ ಗಾಯಗೊಂಡ ಬೈಕ್ ಸವಾರ.

ಈತ ಕುಮಟಾ ಕಡೆಯಿಂದ ಗೋಕರ್ಣ ಕಡೆಗೆ ಬೈಕ್ ಮೂಲಕ ತೆರಳುತ್ತಿರುವಾಗ ಎದುರಿನಿಂದ ಅತೀ ವೇಗದಲ್ಲಿ ಚಾಲಕ ಲಾರಿಯನ್ನು ಚಲಾಯಿಸಿ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಸವಾರನ ಕಾಲಿನ ಮೂಳೆ ಮುರಿದಿದೆ. ಲಾರಿ ಚಾಲಕ ಮಹಾರಾಷ್ಟ್ರದ ಸಾತರ ನಿವಾಸಿ ಸುನಿಲ್ ಲಕ್ಷ್ಮಣ್ ಮೋಡಕ್ ವಿರುದ್ದ ಪ್ರಕಾರಣ ದಾಖಲಿಸಿಕೊಂಡಿದ್ದಾರೆ.