ಸಿದ್ದಾಪುರ : ಮೃತನ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದ ಪರಮೇಶ್ವರ್ ಕುಟುಂಬ .

ಸಿದ್ದಾಪುರ : ಅಪಘಾತಕ್ಕೀಡಾದ ವ್ಯಕ್ತಿ ಯೋರ್ವ ಬಹು ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಿತದೆ ಮಂಗಳವಾರ ಬೆಳಗಿನ ಜಾವ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ
ಮೃತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ
ಪರಮೇಶ್ವರ್ ನಾಯ್ಕ್ ದೊಡ್ಡಗದ್ದೆ ( ಚಂದ್ರಘಟಗಿ ) ಮೃತ ವ್ಯಕ್ತಿಯಾಗಿದ್ದಾನೆ
ಜನವರಿಯಲ್ಲಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಬೈಕ್ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕನಾದ ಪರಮೇಶ್ವರನಿಗೆ ತೀವ್ರ ಗಾಯವಾಗಿತ್ತು ಆತನನ್ನ ಮಂಗಳೂರಿಗೆ ಚಿಕಿತ್ಸೆಗೆ ದಾಖಲಿಸಿ ಸ್ವಲ್ಪ ಚೇತರಿಸಿಕೊಂಡ ನಂತರ ಸಿದ್ದಾಪುರ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಿಗಿನ ಜಾವದಲ್ಲಿ ಮೃತಪಟ್ಟಿದ್ದು ಮೃತನ ಕಣ್ಣುಗಳನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾವಿನ ದುಃಖದಲ್ಲೂ ಮಾನವೀಯತೆ ಮೆರೆದಿದ್ದಾರೆ ಶಿರಸಿಯ ಗಣೇಶ ನೇತ್ರಾಲಯ ಆಸ್ಪತ್ರೆಗೆ ಕಣ್ಣುಗಳನ್ನು ನೀಡಿ ಮಾದರಿಯಾಗಿದ್ದಾರೆ ಮೃತನ ಸಹೋದರ ಬಿ ಎಸ್ ಎನ್ ಡಿ ಪಿ ತಾಲೂಕ ಅಧ್ಯಕ್ಷ ವಿನಾಯಕ ದೊಡ್ಡಗದ್ದೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.