ಸಿದ್ದಾಪುರದ ಮನ್ಮನೆ ಪಂಚಾಯತ್ ವ್ಯಾಪ್ತಿಯಲ್ಲಿನ ಕಿರಿಯ ಪ್ರಾಥಮಿಕ ಶಾಲೆ ಮಳಲವಳ್ಳಿಯಲ್ಲಿವನಮಹೋತ್ಸವಕ್ಕೆ ಚಾಲನೆ

ಸಿದ್ದಾಪುರ ತಾಲೂಕಿನ ಮನ್ಮನೆ ಪಂಚಾಯತ್ ವ್ಯಾಪ್ತಿಯಲ್ಲಿನ ಕಿರಿಯ ಪ್ರಾಥಮಿಕ ಶಾಲೆ ಮಳಲವಳ್ಳಿಯಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಕೋಟಿ ವೃಕ್ಷ ಪಾಲನೆ ಕಾರ್ಯಕ್ರಮದ ಅಡಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ನೆಡಲಾಯಿತು.ಅರಣ್ಯ ಇಲಾಖೆಯ ಸಿಬ್ಬಂದಿ ರಾಜು.ದ್ಯಾಮಣ್ಣವರ್ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯ ನೆರವೇರಿತು.ಶಾಲೆಯ ಮುಖ್ಯ ಶಿಕ್ಷಕಿ ಉಮಾ.ಎಸ್.ಕೆ ಸ್ವಾಗತಿಸಿದರು.ಶಿಕ್ಷಕ ಎಂ.ಡಿ.ನಾಯ್ಕ ವನಮಹೋತ್ಸವದ ಮಹತ್ವ ವಿವರಿಸಿ ವಂದನೆ ಸಲ್ಲಿಸಿದರು.ನೇತ್ರಾ,ಬಂಗಾರಿ.ನಾಯ್ಕ, ಹುಚ್ಚಪ್ಪ,ನಾಯ್ಕ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಸಹಕರಿಸಿದರು