ಸಿದ್ದಾಪುರ : ಬೇಡ್ಕಣಿಯ ಕೋಟೆ ಹನುಮಂತನಿಗೆ ಬೆಣ್ಣೆಯ ಅಲಂಕಾರ ಸೇವೆ.

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವು ಸಾಧಿಸಿದರೆ ತಾಲೂಕಿನ ಬೇಡ್ಕಣಿಯ ಕೋಟೆ ಹನುಮಂತನಿಗೆ ಬೆಣ್ಣೆಯ ಅಲಂಕಾರ ಮಾಡಿಕೊಡುವುದಾಗಿ ಸಂಕಲ್ಪ ಮಾಡಿಕೊಂಡಂತೆ ಕಾಂಗ್ರೆಸ್ ಮುಖಂಡ ತ್ಯಾರ್ಸಿಯ ಮಂಜುನಾಥ ಎಚ್ ನಾಯ್ಕ ಬೆಣ್ಣೆಯ ಅಲಂಕಾರ ಮಾಡಿಸಿದ್ದರು.
ಸುಮಾರು 8 ಕೆಜಿ ಬೆಣ್ಣೆಯಲ್ಲಿ ಕೋಟೆ ಆಂಜನೇಯನಿಗೆ ಅಲಂಕಾರ ಮಾಡಲಾಗಿದ್ದು, ಅಂದುಕೊಂಡಂತೆ ಗೆಲುವು ಸಾಧಿಸಿದ ಭೀಮಣ್ಣ ನಾಯ್ಕ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ತ್ಯಾರ್ಸಿ, ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ, ಎನ್.ಟಿ.ನಾಯ್ಕ, ಎಸ್.ಕೆ.ನಾಯ್ಕ ಕಡಕೇರಿ ಮತ್ತಿತರರು ಉಪಸ್ಥಿತರಿದ್ದರು.