ಸಿದ್ದಾಪುರ : ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ ಐವರ ಮೇಲೆ ಪ್ರಕರಣ ದಾಖಲು.

ಸಿದ್ದಾಪುರ : ಅನ್ಯಾಯದ ಲಾಭಕ್ಕೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ವೇಳೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿ ಐವರ ಮೇಲೆ ಪ್ರಕರಣ ದಾಖಲಿಸಿದ ಘಟನೆ ಹೆಗ್ಗರಣೆಯಲ್ಲಿ ನಡೆದಿದೆ.
ಹೆಗ್ಗರಣಿಯ ಸರ್ಕಾಲ್ ಸಮೀಪದ ಬೇಕರಿ ಎದುರಿಗಿರುವ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಂಥವಾಗಿ ಕಟ್ಟಿಕೊಂಡು ಅಂದರ್ ಬಾಹರ ಆಡುತ್ತಿದ್ದಾಗ ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 7090 ರೂ ನಗದು ಹಾಗೂ ಪರಿಕರಗಳನ್ನು ವಶಕ್ಕೆ ಪಡೆದು ಆಟದಲ್ಲಿ ನಿರತರಾದ ವಿಷ್ಣುವರ್ಧನ್ ಕೆರಿಯ ಗೌಡ ಕುಳ್ಳೇ, ವಿನಯ್ ಈಶ್ವರ್ ಕೊಡಿಯ ದುಗ್ಗಿನಗುಳಿ, ಅರವಿಂದ್ ಸೀತಾರಾಮ್ ಗೌಡ ಹೆಗ್ಗರಣಿ, ಗಜಾನಂದ್ ಲಕ್ಷ್ಮಣ್ ಗೌಡ ಹೆಗ್ಗೆ, ಗಿರಿಧರ್ ಈಶ್ವರ್ ಗೌಡ ಹುಕ್ಳಿ ಎನ್ನುವರುದ್ದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.