ಸಿದ್ದಾಪುರ : ಲಗೇಜ್ ವಾಹನದಲ್ಲಿ ಹೋರಿಗಳ ಸಾಗಾಟ, ಜಾನುವಾರು ವಾಹನ ಸಮೇತ ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು.

ಸಿದ್ದಾಪುರ : ಲಗೇಜ್ ವಾಹನದಲ್ಲಿ ಹೋರಿಗಳನ್ನು
ವಧೆ ಮಾಡುವ ಉದ್ದೇಶ ದಿಂದ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿರುವಾಗ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ ಘಟನೆ ಮಾವಿನಗುಂಡಿಯಲ್ಲಿ ನಡೆದಿದೆ
ಶಿರಾಳಕೊಪ್ಪದಿಂದ ಭಟ್ಕಳಕ್ಕೆ ಹೋರಿಗಳನ್ನು ವಧೆ ಮಾಡಲು ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಕಟ್ಟಿಕೊಂಡು ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಾಗಾಟ ಮಾಡುತ್ತಿದ್ದವಾಗ ಸಿದ್ದಾಪುರ ಪೊಲೀಸ್ ಠಾಣಾ ಪಿ ಎಸ್ ಐ ಎಂ ಜಿ ಕುಂಬಾರ ಹಾಗೂ ಸಿಬ್ಬಂದಿಗಳು ಮಾವಿನಗುಂಡಿ ಚೆಕ್ ಪೋಸ್ಟ್ ಬಳಿ ದಾಳಿ ಮಾಡಿ ಶಿಕಾರಿಪುರ ತಾಲೂಕಿನ ತಾಳಗುಂದದ ಮಾರುತಿ ರಾಮಪ್ಪ ವಡಕನ್ನವರಮನಿ, ಜಿಯಾವುಲ್ಲಾ ಬಾಷಾಸಾಬ್ ಹಳ್ಳೂರಕೇರಿ, ಪೃಥ್ವಿರಾಜ ಸಹದೇವಪ್ಪ ವಡಕನ್ನವರಮನಿ ಎನ್ನುವವರ ಮೇಲೆ ಪ್ರಕರಣ ದಾಖಲಿಸಿ ಕಪ್ಪು ಬಣ್ಣದ ಎರಡು ಹೋರಿ ಕೆಎ 15/ಎ 6690 ನಂಬರಿನ ಮಹೇಂದ್ರ ವಾಹನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ