‘ನಮಗೆ ಅನ್ಯಾಯವಾಗಿದೆ’; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ

ಈ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿವೆ. ವೇಳಾಪಟ್ಟಿ ಪ್ರಕಾರ ಈ ಬಾರಿಯ ವಿಶ್ವಕಪ್ ಭಾರತದ 10 ನಗರಗಳಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಆದರೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಸಿಸಿಐ ವಿರುದ್ಧ ರಾಜ್ಯ ಸಂಘಗಳು ಅಸಮಾಧಾನ ಹೊರಹಾಕಿವೆ.

ವಾಸ್ತವವಾಗಿ ಈ ಬಾರಿಯ ವಿಶ್ವಕಪ್ ಅಹಮದಾಬಾದ್, ಹೈದರಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ 10 ನಗರಗಳಲ್ಲಿ ನಡೆಯಲ್ಲಿದೆ. ಆದರೆ ಈ ವೇಳಾಪಟ್ಟಿ ಪ್ರಕಟವಾಗುವ ಮುನ್ನ ತಿರುವನಂತಪುರಂ ಸೇರಿದಂತೆ 12 ನಗರಗಳು ಪಟ್ಟಿಯಲ್ಲಿದ್ದವು. ಆದರೆ ಐಸಿಸಿ ತನ್ನ ಅಂತಿಮ ಪಟ್ಟಿಯಲ್ಲಿ ಕೇವಲ 10 ನಗರಗಳ ಹೆಸರನ್ನು ಮಾತ್ರ ಅನುಮೋದಿಸಿದೆ. ಇದರಲ್ಲಿ ಮೊಹಾಲಿ, ಇಂದೋರ್, ರಾಂಚಿ, ನಾಗ್ಪುರ ಸೇರಿದಂತೆ ಭಾರತದ ಹಲವು ದೊಡ್ಡ ಮೈದಾನಗಳು ವಿಶ್ವಕಪ್ ಆತಿಥ್ಯದಿಂದ ವಂಚಿತವಾಗಿವೆ.

ಇದೀಗ ಐತಿಹಾಸಿಕ ಮೈದಾನದಲ್ಲಿ ವಿಶ್ವಕಪ್ ಆಯೋಜನೆಗೆ ಅವಕಾಶ ನೀಡದ ಬಿಸಿಸಿಐ ವಿರುದ್ಧ ರಾಜ್ಯ ಕ್ರಿಕೆಟ್ ಸಂಘಗಳು ಅಸಮಾಧಾನ ಹೊರಹಾಕಿವೆ. ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಅಧ್ಯಕ್ಷ ಅಭಿಲಾಷ್ ಖಾಂಡೇಕರ್, 1987 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯ ಇಂದೋರ್‌ನಲ್ಲಿ ನಡೆದಿತ್ತು.