ಹಳಿಯಾಳ ತಾಲ್ಲೂಕಿನ ಶಿವಪುರದಲ್ಲಿ ಜಾನುವಾರುಗಳಿಗೆ ಉಚಿತ ಲಸಿಕೆ ಮತ್ತು ಔಷಧಿ ವಿತರಣೆ

ಹಳಿಯಾಳ: ಶ್ರೀ.ತುಳಜಾಭವಾನಿ ಧಾರ್ಮಿಕ, ಶೈಕ್ಷಣಿಕ ಧಮಾರ್ಥ ಟ್ರಸ್ಟ್ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ, ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಜಾನುವಾರುಗಳಿಗೆ ಉಚಿತ ಲಸಿಕೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುರ್ಕವಾಡದ ಪಶು ಸಂಗೋಪನಾ ಇಲಾಖೆಯ ಡಾ. ಎಂ.ಬಿ.ಹಿರೇಮಠ, ಸುಭಾಷ್ ಬಿರ್ಜೆ, ಹನುಮಂತ್ ಹರಿಜನ, ರೇಣುಕಾ ಗುತ್ತೆನ್ನವರ, ಸಂತೋಷ್ ಬಾಂದುರ್ಗಿ ಹಾಗೂ ಇಲಾಖೆಯ ಸಿಬ್ಬಂದಿಗಳು, ಎನ್.ಆರ್.ಎಂ.ಎಲ್ ಇದರ ಸಕ್ಕುಬಾಯಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕರಾದ ಉಳವಯ್ಯ ಬೆಂಡಿಗೇರಿಯವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮುರ್ಕವಾಡದ ಪಶು ಸಂಗೋಪನಾ ಇಲಾಖೆಯ ಡಾ. ಎಂ.ಬಿ.ಹಿರೇಮಠ, ಸುಭಾಷ್ ಬಿರ್ಜೆ, ಹನುಮಂತ್ ಹರಿಜನ, ರೇಣುಕಾ ಗುತ್ತೆನ್ನವರ, ಸಂತೋಷ್ ಬಾಂದುರ್ಗಿ ಹಾಗೂ ಇಲಾಖೆಯ ಸಿಬ್ಬಂದಿಗಳು, ಎನ್.ಆರ್.ಎಂ.ಎಲ್ ಇದರ ಸಕ್ಕುಬಾಯಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕರಾದ ಉಳವಯ್ಯ ಬೆಂಡಿಗೇರಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು 197 ಜಾನುವಾರುಗಳಿಗೆ ಲಸಿಕೆ ನೀಡಲಾಯ್ತು ಮತ್ತು ಔಷಧಿಯನ್ನು ವಿತರಿಸಲಾಯ್ತು. ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.