ಹೊನ್ನಾವರದ ಮಂಕಿ ಸಮುದ್ರ ತೀರದಲ್ಲಿ ದೋಣಿ ಮುಳುಗಿ ಸಾವನ್ನಪ್ಪಿದ ಯುವಕ

ದೈತ್ಯ ಅಲೆಗಳ ನಡುವೆ ಸಿಲುಕಿರುವ ದೋಣಿ.. ಹೇಗಾದ್ರೂ ಮಾಡಿ ದಡಕ್ಕೆ ಬರಬೇಕು ಅಂತ ಒದ್ದಾಡುತ್ತಿರುವ ಮೀನುಗಾರ.. ಅದ್ರೆ ರಕ್ಕಸ ಅಲೆಗಳ ಆರ್ಭಟದ ಮುಂದೆ ಈ ಮಿನುಗಾರನ ಹೋರಾಟ ಫಲಿಸಲೇ ಇಲ್ಲ… ನೋಡ ನೋಡುತ್ತಿದ್ದಂತೆ ದೋಣಿ ಸಮುದ್ರದಲ್ಲಿ ಮುಳುಗಿ ಮೀನುಗಾರ ಸಾವನ್ನಪ್ಪಿದ್ದಾನೆ….

ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಹೊನ್ನಾವರ ತಾಲೂಕಿನ ಮಂಕಿಯ ಮಡಿಯಲ್ಲಿ. ಈ ದುರ್ಘಟನೆಯನ್ನು ಮೃತಮಟ್ಟ ವ್ಯಕ್ತಿ ಹೆಸರು ಮಂಕಿಯ ಅಳವೆಹಿತ್ಲು ನಿವಾಸಿ ಇರ್ಫಾನ್‌. ಪ್ರತಿದಿನದಂತೆ ಭಾನುವಾರವೂ ಇರ್ಫಾನ್‌ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದ. ಆದ್ರೆ ದಡಕ್ಕೆ ಬರುತ್ತಿರುವಾಗ ಅಲೆಗಳ ಅಬ್ಬರದ ಮದ್ಯೆ ದೋಣಿ ಸಿಲುಕಿದೆ..

ಈ ದೃಶ್ಯದಲ್ಲಿ ಇರ್ಫಾನ್‌ ದೋಣಿಯನ್ನು ದಡಕ್ಕೆ ತರೋದಕ್ಕೆ ಹರಸಾಹಸ ಮಾಡಿದ್ದಾನೆ. ಆದ್ರೆ ಅಬ್ಬರದ ಅಲೆಗಳ ಮುಂದೆ ಇರ್ಫಾನ್‌ನದ್ದು ವ್ಯರ್ಥ ಪ್ರಯತ್ನವಾಗಿದೆ. ಎಲ್ಲರ ಕಣ್ಣೆದುರೆ ದೋಣಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿದ್ದವರು ಬೋಟ್‌ ಮೂಲಕ ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ರೂ ಪ್ರಯೋಜನವಾಗ್ಲಿಲ್ಲ.. ಈ ಸಂಬಂಧ ಮಂಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

.

ಸಿರಿ ನುಡಿ ನ್ಯೂಸ್‌ ಡೆಸ್ಕ್‌, ಹೊನ್ನಾವರ