ಜೋಯಿಡಾದಲ್ಲಿ ಅಕ್ರಮ ಮರಳು ದಾಸ್ತಾನು ಅಡ್ಡೇ ಮೇಲೆ ದಾಳಿ – ಲಕ್ಷಾಂತರ ಮೌಲ್ಯದ ಮರಳು ವಶ

ಜೋಯಿಡಾ : ತಾಲೂಕಿನ ರಾಮನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. ವೈಜಗಾವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ….
ತಹಶೀಲ್ದಾರ್ ಬಸವರಾಜ ತೆನಳ್ಳಿ, ಪಿಎಸ್ಐಗಳಾದ ಬಸವರಾಜ್ ಮತ್ತು ಕೃಷ್ಣಕಾಂತ್ ಪಾಟೀಲ್, ಉಪ ತಹಶೀಲ್ದಾರ್ ಸುರೇಶ್ ಒಕ್ಕುಂದ, ಹಾಗೂ ಕಂದಾಯ ಅಧಿಕಾರಿ ಶ್ಯಾಮಸುಂದರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 3,30,000 ರೂಪಾಯಿ ಮೌಲ್ಯದ ಮರಳನ್ನು ವಶಪಡಿಸಿಕೊಂಡು ತಹಶೀಲ್ದಾರರಿಗೆ ಹಸ್ತಾಂತರ ಮಾಡಿಸಲಾಗಿದೆ. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ಸಂದೇಶ್‌ ಜೈನ್‌, ನುಡಿ ಸಿರಿ ನ್ಯೂಸ್‌, ಜೋಯಿಡಾ