ದುಷ್ಕರ್ಮಿಗಳಿಂದ ಬಸವಣ್ಣನ ವಿಗ್ರಹದ ಕಳವಿಗೆ ಯತ್ನ

ಶಿರಾ (ಜೂ.16): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಾಡುಗೊಲ್ಲರ ಆರಾಧ್ಯ ದೈವ ಕಳುವರಹಳ್ಳಿ ಜುಂಜಪ್ಪನ ಕ್ಷೇತ್ರದಲ್ಲಿರುವ ಬಸವನ ವಿಗ್ರಹವನ್ನು ಕದಿಯಲು ಯತ್ನಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ದುಷ್ಕರ್ಮಿಗಳು ಜುಂಜಪ್ಪನ ಗುಡ್ಡೆ ದೇವರ ಮೂರ್ತಿಯ ಮುಂಭಾಗದಲ್ಲಿದ್ದ ಬಸವಣ್ಣನ ವಿಗ್ರಹದ ಸುತ್ತಲೂ ಅಗೆದಿದ್ದು, ಅಗೆಯುವ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಿದೆ. ನಂತರ ಹಾವನ್ನು ಸಹ ಸಾಯಿಸಿ ಕಳ್ಳತನಕ್ಕೆ ತಂದಿದ್ದ ಸಲಕರಣೆಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.