ಸಿದ್ದಾಪುರ : ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ, ಗ್ರಾಮ ಪಂಚಾಯತ್ ಸದಸ್ಯರಿಂದ ನ್ಯಾಯ ಕ್ಕೆ ಒತ್ತಾಯ.

ಸಿದ್ದಾಪುರ : ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು ನ್ಯಾಯ ಒದಗಿಸಿ ಕೊಡುವಂತೆ ಡಿ ಎಸ್ ಎಸ್ ಮುಖಂಡ ಎಚ್ ಕೆ ಶಿವಾನಂದ ಒತ್ತಾಯ ಮಾಡಿದ್ದಾರೆ
ಎರಡನೇ ಅವಧಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯಲ್ಲಿ ನಿಗದಿ ಸಭೆ ಮುಗಿದ ನಂತರ ಹೇಳಿಕೆ ನೀಡಿದರು
ಭಟ್ಕಳ, ಹಳಿಯಾಳ, ಯಲ್ಲಾಪುರ, ಮುಂಡಗೋಡ ಬಿಟ್ಟು ಉಳಿದ ತಾಲೂಕಿನ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಈ ಅನ್ಯಾಯ ಸರಿಪಡಿಸಬೇಕು ಎಂದು ರಾಜ್ಯ ಚುನಾವಣೆ ಆಯೋಗ ಕ್ಕೆ ಒತ್ತಾಯ ಮಾಡಿದರು .
ಕೆಲ ಪಂಚಾಯತ್ ಸದಸ್ಯರು ತಮ್ಮ ತಮ್ಮ ಪಂಚಾಯತ್ ಗಳಿಗೆ ಮೀಸಲಾತಿ ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಜೊತೆ ಚರ್ಚಿಸಿದರು ಅದಕ್ಕೆ ಜಿಲ್ಲಾಧಿಕಾರಿಗಳು ಉತ್ತರಿಸಿ ಅಧ್ಯಕ್ಷ ,-ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ಚುನಾವಣಾ ಆಯೋಗದ ನಿರ್ಧೆಶನದಂತೆ ನಡೆದಿದ್ದು ಬೇಕಾದಲ್ಲಿ ನೀವು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದರು