ದಾಂಡೇಲಿ :ಶಿವಾಜಿ.ಪಿ.ಮಾದಪ್ಪಗೌಡನ ಸಾಧನೆಗೆ ಆರ್.ವಿ.ದೇಶಪಾಂಡೆ ಹರ್ಷ

ದಾಂಡೇಲಿ : ದಕ್ಷಿಣ ಕೋರಿಯಾದಲ್ಲಿ ನಡೆದ ಕಿರಿಯರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಳಿಯಾಳ ತಾಲ್ಲೂಕಿನ ಬೆಳವಟಗಿ ಗ್ರಾಮದ ಶಿವಾಜಿ.ಪಿ ಮಾದಪ್ಪಗೌಡ ಈತನೂ ಪುರುಷರ 5000 ಮೀ ಓಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ಭಾಜನನಾಗಿರುವುದಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಹರ್ಷ ವ್ಯಕ್ತಪಡಿಸಿದ್ದಾರೆ.

ಅವರು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಶಿವಾಜಿ ಈತನೂ ತಾಲ್ಲೂಕಿನ ಹೆಮ್ಮೆಯಾಗಿದ್ದಾನೆ ಇವನ ಸಾಧನೆ ವಿಶ್ವವ್ಯಾಪಿ ಪಸರಿಸುವಂತಾಗಲೆಂದು ಶುಭವನ್ನು ಹಾರೈಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.