ದಾಂಡೇಲಿ :ದಿ:ಎಸ್.ಆರ್.ಬೊಮ್ಮಾಯಿಯವರ ವ್ಯಕ್ತಿತ್ವ ಸದಾ ಅನುಕರಣೀಯ: ಆರ್.ವಿ.,ದೇಶಪಾಂಡೆ

ದಾಂಡೇಲಿ : ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾಗಿದ್ದ ದಿ: ಎಸ್.ಆರ್.ಬೊಮ್ಮಾಯಿಯವರ ವ್ಯಕ್ತಿತ್ವ ಅವರ ರಾಜಕೀಯ ನಡೆ ಸದಾ ಸ್ಮರಣೀಯ ಮತ್ತು ಅನುಕರಣೀಯವಾಗಿದೆ ಎಂದು ಶಾಸಕರಾದ ಆರ್.ವಿ.ದೇಶಪಾಂಡೆಯವರು ಹೇಳಿದರು.

ಸರ್ವ ಸಮಾನತೆಯ ನಾಡು ಕಟ್ಟುವ ಚಿಂತನೆಯನ್ನು ಹೊಂದಿದ್ದ ಸರ್ವ ಸಮನ್ವಯತೆಯ ಜನನಾಯಕರಾಗಿ ಎಸ್.ಆರ್.ಬೊಮ್ಮಾಯಿಯವರು ಗುರುತಿಸಿಕೊಂಡಿದ್ದರು. ಸರಳತೆ, ಸಂವೇದನಾಶೀಲತೆ, ರಾಜಕೀಯ ಅಪಾರ ಅನುಭವ, ಆಡಳಿತದಲ್ಲಿ ಚುರುಕುತನ, ಸಾಮಾಜಿಕವಾದ ಅವರ ಕ್ರಿಯಾಶೀಲತೆ ನಮಗೆಲ್ಲರಿಗೂ ಅದು ಆದರ್ಶವಾಗಿದೆ. ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ತನಗೆ ಭಾಗಿಯಾಗಲು ಅವಕಾಶ ದೊರೆತಿದ್ದು ತುಂಬ ಸಂತಸ ತಂದಿದೆ ಎಂದು ಆರ್.ವಿ.ದೇಶಪಾಂಡೆಯವರು ತಿಳಿಸಿದ್ದಾರೆ.