ಹಳಿಯಾಳ :ಸುಗಮ ಸಂಚಾರಕ್ಕೆ ಸುಯೋಗ್ಯ ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿ ಶಿವಾನಂದ ಕಟಗಿಯವರಿಗೆ ಸೂಚಿಸಿದ ಆರ್.ವಿ.ದೇಶಪಾಂಡೆ

ಹಳಿಯಾಳ : ಹಳಿಯಾಳ ಪಟ್ಟಣ ಹಾಗೂ ದಾಂಡೇಲಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಪ್ರತಿದಿನ ಕಾಡತೊಡಗಿದ್ದು, ಸುಗಮ ಸಂಚಾರಕೆ ತೀವ್ರ ಅಡಚಣೆಯಾಗುತ್ತಿದೆ. ಈ ಬಗ್ಗೆ ಈಗಾಗಲೆ ವಿವಿಧ ಸಂಘ ಸಂಸ್ಥೆಗಳಿಂದ ದೂರುಗಳು ಬರುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ಮೊದಲ ಆಧ್ಯತೆಯನ್ನು ನೀಡಬೇಕು ಹಾಗೂ ಟ್ರಾಫಿಕ್ ಜಾಂ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಡಿವೈಎಸ್ಪಿ ಶಿವಾನಂದ ಕಟಗಿಯವರಿಗೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ.