ನಿರ್ಮಲ ನಗರ & ಸುದರ್ಶನ ನಗರಕ್ಕೆ ಸಿಟಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಯು.ಎಸ್.ಪಾಟೀಲ್ ಮನವಿ

ದಾಂಡೇಲಿ : ನಗರದ ನಿರ್ಮಲನಗರ ಮತ್ತು ಸುದರ್ಶನ ನಗರಕ್ಕೆ ಈ ಹಿಂದೆ ಸಿಟಿ ಬಸ್ ಸಂಚಾರವಿದ್ದು, ಕಳೆದ ಆರೇಳು ತಿಂಗಳಿನಿಂದ ಇಲ್ಲಿಗೆ ಸಿಟಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗತೊಡಗಿದೆ. ಈ ನಿಟ್ಟಿನಲ್ಲಿ ಸುದರ್ಶನ ನಗರ ಮತ್ತು ನಿರ್ಮಲನಗರದ ಪ್ರಮುಖರು ದಾಂಡೇಲಿ ಸಾರಿಗೆ ಘಟಕದ ವ್ಯವಸ್ಥಾಪಕರನ್ನು ಭೇಟಿಯಾಗಿ ಸಿಟಿ ಬಸ್ ಸಂಚಾರದ ಪುನರಾರಂಭಕ್ಕೆ ಮನವಿಯನ್ನು ಮಾಡಿದ್ದಾರೆ. ಆದ್ದರಿಂದ ಆದಷ್ಟು ಶೀಘ್ರ ಎಂದಿನಂತೆ ನಿರ್ಮಲನಗರ ಮತ್ತು ಸುದರ್ಶನ ನಗರಕ್ಕೆ ಸಿಟಿ ಬಸ್ ಸಂಚಾರವನ್ನು ಪುನರಾರಂಭಿಸಬೇಕೆಂದು ಬಂಗೂರನಗರ ಜ್ಯೂನಿಯರ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಯು.ಎಸ್.ಪಾಟೀಲ್ ಅವರು ಇಂದು ಮಾಧ್ಯಮದ ಮೂಲಕ ಸಾರಿಗೆ ಘಟಕಕ್ಕೆ ಮನವಿ ಮಾಡಿದ್ದಾರೆ.

ಬೈಟ್ : ಯು.ಎಸ್.ಪಾಟೀಲ್, ನಿವೃತ್ತ ಪ್ರಾಚಾರ್ಯರು