ಸಿದ್ದಾಪುರ : ಅನಾಥಾಶ್ರಮದ ಕಟ್ಟಡಕ್ಕೆ ಮಧ್ಯ ಮಾರಾಟಗಾರ ಸಂಘದಿಂದ ಆರ್ಥಿಕ ಸಹಾಯ.

ಸಿದ್ದಾಪುರ : ನಾಗರಾಜ್ ನಾಯ್ಕ್ ಮಾಡುತ್ತಿರುವ ಅನಾಥರ ಸೇವೆಯನ್ನ ಪರಿಗಣಿಸಿ ಆಶ್ರಮದ ಕಟ್ಟಡಕ್ಕೆ ಸಹಾಯ ಮಾಡುತ್ತಿದ್ದೇವೆ ಹಲವು ಸಂದರ್ಭದಲ್ಲಿ ಕೆಲವರಿಗೆ ಸಹಾಯ ಮಾಡುತ್ತ ಬಂದಿದ್ದೇವೆ ಆದರೆ ಅದನ್ನು ಎಲ್ಲಿ ಹೇಳಿಕೊಳ್ಳುತ್ತಿಲ್ಲ ಎಂದು ತಾಲೂಕ ಮದ್ಯ ಮಾರಾಟಗಾರ ಸಂಘದ ಅಧ್ಯಕ್ಷ ಕೆ ಜಿ ನಾಗರಾಜ್ ಹೇಳಿದರು ಅವರು ಪಟ್ಟಣದಲ್ಲಿ ಮುಗ್ದೂರ್ ನಲ್ಲಿರುವ ಪುನೀತ್ ರಾಜಕುಮಾರ್ ಅನಾಥಾಶ್ರಮದ ಕಟ್ಟಡಕ್ಕೆ ಆರ್ಥಿಕ ಸಹಾಯಧನದ ಡಿ ಡಿ ವಿತರಿಸಿ ಮಾತನಾಡಿದರು
ಆಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ್ ಅವರಿಗೆ 50 ಸಾವಿರ ರೂ ಸಹಾಯ ಧನದ ಡಿ ಡಿ ನೀಡಿದರು ಈ ಸಂದರ್ಭದಲ್ಲಿ ರುಡಾಲ್ಫ್ ಫಾರ್ನಾಂಡಿಸ್, ವಿಜಯ ಕುಮಾರ್ , ಪೆಟ್ರಿಕ್ ಡಿಸೈಲ್ವ್,ವಿನಾಯಕ ನಾಯ್ಕ್ ಆನಂದ್ ನಾಯ್ಕ್ ಉಪಸ್ಥಿತರಿದ್ದರು