ಸಿದ್ದಾಪುರ : ಸಮಾಜವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ : ಭೀಮಣ್ಣ ನಾಯ್ಕ್.

ಸಿದ್ದಾಪುರ : ಸಮಾಜದ ಸಂಘಟನೆ ಸಮಾಜಕ್ಕೆ ಪೂರಕವಾಗಿರಬೇಕು ಸರಕಾರದಿಂದ ಸಿಗುವ ಅನುದಾನವನ್ನು ಪಡೆದು ಸಮಾಜವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ್ ರವರು ಹೇಳಿದರು
ಅವರು ಪಟ್ಟಣದಲ್ಲಿ ತಾಲೂಕ ಮಡಿವಾಳ ಸಮಾಜದವರು ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು
ಸಮಾಜವನ್ನು ಎತ್ತಿ ಹಿಡಿದು ಕಷ್ಟದಲ್ಲಿರುವ ಜನತೆಗೆ ನೊಂದವರಿಗೆ ಸಹಾಯ ಸಹಕಾರವನ್ನು ಮಾಡುತ್ತಾ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಸಂಘಟನೆ ಬಲಿಷ್ಠ ಪಡಿಸಬೇಕು ಎಂದರು
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಅಧ್ಯಕ್ಷ ಪಿ ಬಿ ಹೊಸೂರ್, ಸುರೇಂದ್ರ ಗೌಡ ಇಟಗಿ, ವಿಶ್ವ ಗೌಡ, ಸುರೇಂದ್ರ ದಫೇದರ್, ಶ್ರೀನಿವಾಸ್ ಜಿಡ್ಡಿ ನಟರಾಜ್ ಮಡಿವಾಳ್, ಆಕಾಶ್ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು