ಸಿದ್ದಾಪುರ : ಜನತೆಗೆ ನೀಡಿದ ಮಾತುಗಳನ್ನು ಉಳಿಸಿಕೊಳ್ಳೋಣ ಭೀಮಣ್ಣ ನಾಯ್ಕ್.

ಜನರು ಕ್ಷೇತ್ರದ ಅಭಿವೃದ್ಧಿಯ ಬಯಸಿ ಕಾಂಗ್ರೆಸ್ ಗೆ ಮತವನ್ನು ನೀಡಿದ್ದಾರೆ ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಮಾಡಿ ತೋರಿಸಬೇಕಾಗಿದೆ ಹೊಂದಿನ ಶಾಸಕರು ಅಭಿವೃದ್ಧಿ ಮಾಡುವಲ್ಲಿ ನಿಷ್ಕ್ರಿಯ ರಾಗಿದ್ದಾರೆ ಎಂದು ನಮ್ಮ ಮೇಲೆ ನಂಬಿಕೆ ಇಟ್ಟು ನಮಗೆ ಮತವನ್ನು ನೀಡಿದ್ದಾರೆ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿಪಡಿಸೋಣ ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ರವರು ಹೇಳಿದರು
ಅವರು ಪಟ್ಟಣದ ರಾಘವೇಂದ್ರ ಮಠದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯವರು ಆಯೋಜಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ನನ್ನ ಸ್ವಾರ್ಥಕ್ಕಾಗಿ ರಾಜಕಾರಣಕ್ಕಾಗಿ ನನಗೆ ಅಧಿಕಾರ ಬೇಕಾಗಿಲ್ಲ ನಮ್ಮ ನಾಯಕರಾದ ಬಂಗಾರಪ್ಪ ನವರು ಯಾವ ಉದ್ದೇಶದಿಂದ ಯಾವ ಮಾರ್ಗದರ್ಶನದಲ್ಲಿ ಆದೇಶ ನೀಡಿದ್ದಾರೋ ಅದೇ ರೀತಿಯಾಗಿ ಮುಂದುವರೆಯುತ್ತೇನೆ
ಯಾವ ವ್ಯಕ್ತಿ ಬಡತನ ಕೂಲಿ ಕಷ್ಟ ನಷ್ಟ ಅನುಭವಿಸುತ್ತಿದ್ದಾರೋ ಅದೇ ರೀತಿ ವಾತಾವರಣದಲ್ಲಿ ಬೆಳೆದು ಬಂದವನು ಶ್ರೀಮಂತಿಕೆ ಅಹಂಕಾರದಿಂದ ಬಂದವನಲ್ಲ
ಚುನಾವಣೆ ಸಂದರ್ಭದಲ್ಲಿ ನಾವು ಜನತೆಗೆ ಮಾತು ಕೊಟ್ಟಿದ್ದೇವೆ ಈ ಕ್ಷೇತ್ರದ ಜನತೆ ನಮಗೆ ಅವಕಾಶವನ್ನು ನೀಡಿದ್ದಾರೋ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಕಾರ್ಯ ಮಾಡಬೇಕಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತ್ ತಾಲೂಕ್ ಪಂಚಾಯತ್ ಲೋಕಸಭಾ ಚುನಾವಣೆಗಳಲ್ಲಿ ಇದೇ ರೀತಿ ಸಂಘಟನೆ ಮುಂದುವರಿಸಿ ಪಕ್ಷ ನೀಡಿದ ಅಭ್ಯರ್ಥಿಗಳನ್ನು ಗೆಲ್ಲಿಸಿ ದೇಶದ ಜನರು ನೆಮ್ಮದಿಯಿಂದ ವಾತಾವರಣವನ್ನು ಮಾಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಆ ವಾತಾವರಣವನ್ನು ನಿರ್ಮಿಸೋಣ ಎಂದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು
ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಅಭಿಮಾನಿಗಳು ಭೀಮಣ್ಣ ನಾಯ್ಕ್ ರವರಿಗೆ ಹೂ ಗುಚ್ಛ ನೀಡಿ ಶಾಲು ಹಾಕಿ ಸನ್ಮಾನಿಸಿ ಗೌರವಿಸಿದರು