ಸಿದ್ದಾಪುರ /ಕುಮಟಾ : (ಉತ್ತರಕನ್ನಡ )ಜೂನ್ 3.4 ರಂದು ಕುಮಟಾ ನಾಮಧಾರಿ ಭವನದಲ್ಲಿ ಚಿಂತನ ಸಭೆ.



ಸಿದ್ದಾಪುರ : ಪ್ರಣವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಜೂನ್ ಮೂರು ಮತ್ತು ನಾಲ್ಕರಂದು ಚಿಂತನ ಸಭೆಯನ್ನು ಹಮ್ಮಿಕೊಂಡಿದ್ದು ಸಮಾಜ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ರಾಷ್ಟ್ರೀಯ ಆರ್ಯ ಈಡಿಗ ಮಹಾಮಂಡಳಿಯ ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ್ ರವರು ವಿನಂತಿಸಿದರು
ಅವರು ಕುಮಟಾದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಕುಮಟಾದ ನಾಮಧಾರಿ ಸಮುದಾಯ ಭವನದಲ್ಲಿ ಶ್ರೀ ಗಳ ನೇತೃತ್ವದಲ್ಲಿ ಚಿಂತನೆ ಸಭೆ ಹಾಗೂ ವಿಧಾನ ಸಭೆ ಗೆ ಆಯ್ಕೆಯಾದ ಸಮಾಜದ ಶಾಸಕರುಗಳಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಈ ಕಾರ್ಯಕ್ರಮ ಕ್ಕೆ ಸಮಾಜ ಬಾಂದವರು ಪಕ್ಷ ಬೇದ ಮರೆತು ಪಾಲ್ಗೊಂಳುವಂತೆ ವಿನಂತಿಸಿದರು
ಶ್ರೀಗಳು ಹೋರಾಟದ ಮೂಲಕ ನಾರಾಯಣ ಗುರು ನಿಗಮ ಮಾಡಿಕೊಂಡು ಬಂದಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ ಹಾಗಾಗಿ ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು ಈ ಸಂದರ್ಭದಲ್ಲಿ ಸುನೀಲ್ ಸಿದ್ದಾಪುರ,ಸಚಿನ್ ನಾಯ್ಕ್ ದರ್ಬೆ ಜಡ್ಡಿ , ರಾಘವೇಂದ್ರ ನಾಯ್ಕ್ ಕೊಂಡಳ್ಳಿ, ಗುರುಪ್ರಸಾದ್ ನಾಯ್ಕ್ ಅರೆ ಅಂಗಡಿ ಅನಿಲ್ ಕೊಠರಿ ಉಪಸ್ಥಿತರಿದ್ದರು