ದಾಂಡೇಲಿ :ಪಟೇಲ್ ವತ್ತದ ಹತ್ತಿರದಲ್ಲಿ ಹದಗೆಟ್ಟ ರಸ್ತೆ- ದುರಸ್ತಿಗೆ ಮನವಿ

ದಾಂಡೇಲಿ : ನಗರದ ಪ್ರಮುಖ ವೃತ್ತಗಳಲ್ಲಿ ಒಂದಾಗಿರುವ ಪಟೇಲ್ ವೃತ್ತದ ಹತ್ತಿರವಿರುವ ರಸ್ತೆಯಂತೂ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇನ್ನೂ ಸಾಕಷ್ಟು ದ್ವಿಚಕ್ರ ವಾಹನ ಸವಾರರು ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳಿವೆ.

ಇಲ್ಲಿ ಯುಜಿಡಿ ಪೈಪ್ಲೈನಿಗಾಗಿ ಮತ್ತು ದಾಂಡೇಲಿಯಿಂದ ಅಳ್ವಾವರಕ್ಕೆ ಕುಡಿಯುವ ನೀರು ಕೊಂಡೊಯ್ಯಲು ರಸ್ತೆ ಅಗೆದು ಪೈಪ್ ಆಳವಡಿಸಿದ ನಂತರ ಮಣ್ಣು ಹಾಕಿ ಮುಚ್ಚಲಾಗಿದೆಯೆ ವಿನ: ಅಗೆದು ಮುಚ್ಚಿದ ಗುಂಡಿಯನ್ನು ಸಮತಟ್ಟು ಮಾಡದಿರುವುದು ಮತ್ತು ಡಾಂಬರೀಕರಣ ಮಾಡದಿರುವುದರಿಂದ ಹೊಂಡಗಳು ನಿರ್ಮಾಣವಾಗಿ ರಸ್ತೆ ತೀವ್ರ ಹದಗೆಟ್ಟಿದೆ. ಕಳೆದ ಆರೇಳು ತಿಂಗಳುಗಳಿಂದ ಹದಗೆಟ್ಟಿರುವ ಈ ರಸ್ತೆಯನ್ನು ಕೂಡಲೆ ದುರಸ್ತಿ ಮಾಡಿಕೊಡುವಂತೆ ಇಂದು ಶುಕ್ರವಾರ ಮಾಧ್ಯಮದ ಮೂಲಕ ಬಜರಂಗ ದಳದ ಜಿಲ್ಲಾ ಸುರಕ್ಷ ಪ್ರಮುಖರಾದ ಚಂದ್ರು ಮಾಳಿ ಮತ್ತು ನಗರದ ಹಿರಿಯ ಮಹಿಳೆ ಗಂಗಮ್ಮಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.