ಹಳಿಯಾಳ :ಹೊಸೂರು ಗಲ್ಲಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಶೀಲಿಸಿದ ಅಜರ್ ಬಸರಿಕಟ್ಟಿ

ಹಳಿಯಾಳ : ಪಟ್ಟಣದ ಹೊಸೂರು ಗಲ್ಲಿಗೆ ಹಳಿಯಾಳ ಪುರಸಭೆಯ ಅಧ್ಯಕ್ಷರಾದ ಅಜರ್ ಬಸರಿಕಟ್ಟಿಯವರು ಇಂದು ಭೇಟಿ ನೀಡಿ ವಾರ್ಡಿನಲ್ಲಿರುವ ವಿವಿಧ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಳೆಗಾಲದ ಮುನ್ನ ಆಗಬೇಕಾದ ಅಗತ್ಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಅವಶ್ಯ ಕೆಲಸ ಕಾರ್ಯಗಳನ್ನು ಕೂಡಲೆ ಮಾಡಿಕೊಡಲಾಗುವುದೆಂದು ಭರವಸೆಯನ್ನು ನೀಡಿದರು. ಸಂದರ್ಭ ಸಿಕ್ಕಾಗಲೆಲ್ಲ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ವಾರ್ಡಿನ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಜರ್ ಬಸರಿಕಟ್ಟಿಯವರು ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.