ರಾಯಚೂರಿನಲ್ಲಿ ಮೊಸಳೆ ದಾಳಿಗೆ ಬಾಲಕ ಬಲಿ – ಮೃತದೇಹಕ್ಕಾಗಿ ಹುಡುಕಾಟ

ರಾಯಚೂರು: ಕೃಷ್ಣಾ ನದಿಗೆ ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ.


ನವೀನ್ ಕೃಷ್ಣಾ (9) ಮೊಸಳೆ ದಾಳಿಗೆ ಒಳಗಾದ ಬಾಲಕ. ಶಾಲೆಗೆ ರಜೆ ಇದ್ದ ಕಾರಣ ತಂದೆ- ತಾಯಿಯ ಜೊತೆ ಹೊಲಕ್ಕೆ ಹೋಗಿದ್ದ ನವೀನ್ ನದಿಯಲ್ಲಿ ನೀರು ತರಲು ಹೋದಾಗ ಈ ಘಟನೆ ನಡೆದಿದೆ. ನದಿಯಲ್ಲಿ ನಾಪತ್ತೆಯಾದ ನವೀನ್ ಮೃತದೇಹಕ್ಕಾಗಿ ಕೃಷ್ಣಾ ನದಿಯಲ್ಲಿ ಹುಡುಕಾಟ ಮುಂದುವರೆದಿದೆ.
ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಲು ಶುರುವಾಗುತ್ತಿದಂತೆ ಮೊಸಳೆಗಳ ಕಾಟ ವಿಪರೀತವಾಗುತ್ತದೆ. ಇದರಿಂದಾಗಿ ನದಿ ಪಾತ್ರದ ಜಮೀನುಗಳ ರೈತರು ತಮ್ಮ ಜಮೀನಿಗೆ ಹೋಗಲು ಹೆದರುತ್ತಿದ್ದಾರೆ.