ಕೃಷ್ಣ ಮೃಗದ ‌ಕೊಂಬು ಹಾಗೂ ಚರ್ಮ‌ ಮಾರಾಟ ಜಾಲ ಪತ್ತೆ: ಓರ್ವನ ಬಂಧನ

ಕೃಷ್ಣ ಮೃಗದ (blackbucks) ಕೊಂಬು ಹಾಗೂ ಚರ್ಮ‌ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಓರ್ವನ ಬಂಧನ ಮಾಡಿದ್ದಾರೆ

ದಾವಣಗೆರೆ: ಕೃಷ್ಣ ಮೃಗದ (blackbucks) ಕೊಂಬು ಹಾಗೂ ಚರ್ಮ‌ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಓರ್ವನ ಬಂಧನ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ಮಲ್ಲಪ್ಪ ಮಾಂಡಾಳಿ (46)ಬಂಧಿತ ಆರೋಪಿ. ಜಿಲ್ಲೆಯ ಚನ್ನಗಿರಿ ತಾಲೂಕಿನ ಗರಗ ಕ್ರಾಸ್ ಬಳಿ ಹೊಟೇಲ್​ನಲ್ಲಿ ಕೃಷ್ಣ ಮೃಗದ ಕೊಂಬು ಹಾಗೂ ಚರ್ಮ ಮಾರಾಟ ಮಾಡುವ ವೇಳೆ ಬಂಧನ ಮಾಡಲಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳದ ಕಾರ್ಯಾಚರಣೆಯಿಂದ ಎರಡು ಕೃಷ್ಣ ಮೃಗದ ಕೊಂಬು ಹಾಗೂ ಮೂರು ಕೃಷ್ಣ ಮೃಗದ ಚರ್ಮವನ್ನು ವಶಕ್ಕೆ ಪಡೆಯಲಾಗಿದೆ.