ಹಳ್ಳಕ್ಕೆ ಬಿದ್ದು ಹಸು ಸಾವು.!

ಯಲ್ಲಾಪುರ: ತಾಲೂಕಿನಲ್ಲಿ ಭಾನುವಾರ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಆಗುವ ಅವಾಂತರಗಳು ಮಾತ್ರ ತಪ್ಪುತ್ತಿಲ್ಲ. ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಕಂಚನಳ್ಳಿ ಗ್ರಾಮದ ಚಿಮಣಿಮಾಳ ಹಳ್ಳದ ನೀರಿನಲ್ಲಿ ಸಿಲುಕಿ ಎತ್ತೊಂದು ಮೃತಪಟ್ಟಿದೆ. ಜಾನು ದೇವು ಜಂಗ್ಲೆ ಎಂಬವರಿಗೆ ಸೇರಿದ ಹಸು ಇದಾಗಿದ್ದು, ಮೇಯಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹಳ್ಳದಲ್ಲಿ ಬಿದ್ದು ಮೃತಪಟ್ಟಿದೆ.

Leave a Reply

Your email address will not be published. Required fields are marked *