ಜೇನುಗೂಡು ಹಾಳುಮಾಡಿ ಜೇನು ಕದ್ದೊಯ್ದ ಖದೀಮರು.!

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಹೊರಮನೆ ಗ್ರಾಮದಲ್ಲಿ ನಾರಾಯಣ ಮಾಬ್ಲೇಶ್ವರ ಭಟ್ಟ ಎನ್ನುವವರಿಗೆ ಸೇರಿದ ಜೇನುಪೆಟ್ಟಿಗೆಗಳನ್ನು ಹಾಳು ಮಾಡಿ ಕಳ್ಳರು ಜೇನು ಕದ್ದೊಯ್ದ ಘಟನೆ ನಡೆದಿದೆ.

ನಾರಾಯಣ ಭಟ್ಟ ಅವರು ಮನೆಯ ಅಕ್ಕಪಕ್ಕ ಮತ್ತು ಅಡಿಕೆ ತೋಟದಲ್ಲಿ, ಹದಿನೆಂಟು ಜೇನುಗೂಡುಗಳನ್ನು ಇರಿಸಿದ್ದರು. ಅವುಗಳಲ್ಲಿ ಎಂಟು ಜೇನುಪೆಟ್ಟಿಗೆಗಳನ್ನು ಕಳ್ಳರು ಮುಚ್ಚಳ ಕಿತ್ತು, ಪ್ರೇಮುಗಳನ್ನು ಹೊರಗೆಸೆದು ಜೇನುತುಪ್ಪ ಕದ್ದೊಯ್ದಿದ್ದಾರೆ.

ಹೀಗಾಗಿ ಜೇನುಗೂಡುಗಳಿಗೆ ಬಹಳ ಹಾನಿಯಾಗಿದ್ದು, ಸ್ಥಳೀಯ ಗ್ರಾ.ಪಂ ಸದಸ್ಯ ಕುಪ್ಪಯ್ಯ ಪೂಜಾರಿ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಮಂಚೀಕೇರಿ ಉಪ ಪೋಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *