ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ : ಜಿಲ್ಲೆಯ ಹಾಲಿ ಶಾಸಕರಿಗೆ ಟಿಕೆಟ್ ಫೈನಲ್

ಕಾರವಾರ: ಕರ್ನಾಟಕ ೨೦೨೩ರ ವಿಧಾನಸಭೆ ಚುನಾವಣೆಯ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಿಗೆ ಟಿಕೆಟ್ ಘೋಷಿಸಿದೆ. ಕಾರವಾರ ವಿಧಾನಸಭಾ ಕ್ಷೇತ್ರದಿಂದ ರೂಪಾಲಿ ನಾಯ್ಕ , ಹಳಿಯಾಳದಿಂದ ಸುನೀಲ್ ಹೆಗಡೆ, ಕುಮಟಾದಿಂದ  ದಿನಕರ ಶೆಟ್ಟಿ, ಭಟ್ಕಳಕ್ಕೆ ಸುನೀಲ್ ನಾಯ್ಕ, ಯಲ್ಲಾಪುರಕ್ಕೆ ಶಿವರಾಮ ಹೆಬ್ಬಾರ್, ಶಿರಸಿಯಿಂದ  ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಫೈನಲ್ ಆಗಿದೆ. ಮಾದ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ, ದಿನಕ್ಕೊಂದು ಸುದ್ದಿಗೆ ತೆರೆ ಬಿದ್ದಿದೆ.