ಸಿ.ಟಿ ರವಿ ಬಗ್ಗೆ ಬಿ.ಕೆ ಹರಿಪ್ರಸಾದ್ ಹೇಳಿದ್ದೇನು.?!

ಭಟ್ಕಳ: ಸಿಟಿ ರವಿ ಕುಡಿದಾಗ ಸ್ಪಲ್ಪ ಮಾತನಾಡುತ್ತಾರೆ, ಗಾಂಜಾನು ಹೊಡಿತಾರೆ ಕುಡಿದು ನಮ್ಮ ಪಕ್ಷಕ್ಕೆ ಸೇರಿದರೂ ಸೇರಬಹುದು ಎಂದು ಪಟ್ಟಣದಲ್ಲಿ ಬಿಕೆ ಹರಿಪ್ರಸಾದ್  ತಿರುಗೇಟು ನೀಡಿದ್ದಾರೆ.

ಅವರು ಭಟ್ಕಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿಯವರಿಗೆ ಪ್ರಜಾಪಭುತ್ವದಲ್ಲಿ ಕರೀದಿ ಮಾಡುವ ಸಾಮರ್ಥ್ಯ ಇದೆ. ಎಮ್.ಎಲ್.ಎ ಗಳನ್ನು ಕರೀದಿ ಮಾಡ್ತಾರೆ. ಜನರ ಆಶಿರ್ವಾದ ಬಿಜೆಪಿಗೆ ಇಲ್ಲ ಎಂದು ಹರಿಹಾಯ್ದರು.

ಇನ್ನೂ ಜೆಡಿಎಸ್ ಜ್ಯಾಯಿಂಟ್ ಫ್ಯಾಮಿಲಿ ಇದ್ದಹಾಗೆ ಹಾಗಾಗಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಕೆಲವು ಪ್ರಕ್ರಿಯೆಗಳು ಇವೆ. ಅವು ಮುಗಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.