ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ಈಜಲು ತೆರಳಿದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ರಕ್ಷಣೆ ಮಾಡಿದ ಕೆ.ಎಸ್. ಆರ್.ಟಿ.ಸಿ ಬಸ್ ಚಾಲಕನನ್ನು ಬಸವರಾಜ್ ಗದಗ ಜಿಲ್ಲೆಯ ಬಾಲೆ ಹೋಸೂರು ಎಂದು ತಿಳಿದು ಬಂದಿದೆ.

ಈತ ಧರ್ಮಸ್ಥಳದಿಂದ ಮುರ್ಡೇಶ್ವರಕ್ಕೆ ಬಂದ ವೇಳೆ ದೇವರ ದರ್ಶನ ಮುಗಿಸಿ ಸಮುದ್ರದ ಈಜಲು ಹೋದ ವೇಳೆ ಅಲೆಗೆ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ. ಇದನ್ನು ಗಮನಿಸಿದ ಒಸಿಯನ್ ಅಡ್ವೆಂಚರ್ಸ್ ಲೈಫ್ ಗಾರ್ಡ್ ಸಿಬ್ಬಂದಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.