ಕೆ.ಎಸ್.ಆರ್.ಟಿ.ಸಿ ಬಸ್, ಆಟೋ ನಡುವೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಭಟ್ಕಳ: ಸಾಗರ ರಸ್ತೆಯ ಕಡವಿನಕಟ್ಟೆ ಕ್ರಾಸ್ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಅಪಘಾತವಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಆಟೋ ಚಾಲಕ ಜಟ್ಟಾ ನಾಯ್ಕ ಮತ್ತು ಪ್ರಯಾಣಿಕರಾದ ಹೊನ್ನಾವರದ ಬಳಕೂರು ನಿವಾಸಿ ಜಯಂತಿ ಪೈ ಗಂಭೀರ ಗಾಯಗೊಂಡಿದ್ದು, ಇನ್ನುಳಿದ ಸತೀಶ್ ರಾಮಚಂದ್ರ ಹುನ್ಸ್ವಾಡ್ಕರ್, ಸೌಮ್ಯ ಸತೀಶ್ಹು ನ್ಸ್ವಾಡ್ಕರ್, ಹಳಿಯಾಳ ನಿವಾಸಿ ಗಳಾಗಿದ್ದು ಹಾಗೂ ಮಾಹಲಕ್ಷ್ಮೀ ಕಿಣಿ ಹಲ್ಯಾಣಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಆಟೋದಲ್ಲಿ ಭಟ್ಕಳ ಕಡೆಗೆಯಿಂದ ಹಲ್ಯಾಣಿ ಕಡೆಗೆ ಹೋಗುತ್ತಿದ್ದ ವೇಳೆ ಸಾಗರ ರಸ್ತೆಯಲಿರುವ ಬಸ್ ಡಿಪೋದಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ್ ಮತ್ತು ಉಡುಪಿ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಅಪಘಾತ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.