ಭಟ್ಕಳ ತಾಲೂಕಿನ ಜಾತ್ಯಾತೀತ ಜನತಾದಳದ ನೂತನ ಅಧ್ಯಕ್ಷರಾಗಿ ರಾಜವರ್ಧನ್ ಎನ್. ನಾಯ್ಕ ನೇಮಕ

ಭಟ್ಕಳ: ಜಾತ್ಯಾತೀತ ಜನತಾದಳ ಭಟ್ಕಳ ಇದರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಾಜವರ್ಧನ್ ಎನ್. ನಾಯ್ಕ ನೇಮಕಗೊಂಡಿದ್ದಾರೆ. ನೂತನ ಪಧಾಧಿಕಾರಿಗಳ ನೇಮಕವನ್ನು ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷ ಗಣಪಯ್ಯ ಗೌಡ ಮಾಡಿದ್ದಾರೆ.

ಇನ್ನೂ ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಎಂ. ನಾಯ್ಕ ಶಿರಾಲಿ, ಸಹ ಕಾರ್ಯದರ್ಶಿ ಮಂಜುನಾಥ ಎನ್. ನಾಯ್ಕ ಬಸ್ತಿಮಕ್ಕಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ ಎನ್. ನಾಯ್ಕ ಬೈಲೂರು, ಸಹ ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ ಎಂ. ಬಾಕಡ ಚಿತ್ರಾಪುರ, ಖಜಾಂಚಿಯಾಗಿ ಸಣ್ಣು ಸುಕ್ರ ಗೊಂಡ, ನೂಜ್ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.