ಭಟ್ಕಳ ತಲುಪಿದ ಉದ್ಯಮಿ ಬುಚ್ಚಿಯವರ ‘ಚಿನ್ನದ ಮರ್ಡೋನ್ನ ಪ್ರತಿಮೆಯೊಂದಿಗೆ ಕತಾರ್ ಪ್ರವಾಸ’ ಯಾತ್ರೆ

ಭಟ್ಕಳ: ಮಾದಕ ವಸ್ತುಗಳ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ಕೇರಳದ ಉದ್ಯಮಿ ಬುಚ್ಚಿ ಎಂಬುವವರು ಕೇರಳದಿಂದ ಕತಾರ್‌ಗೆ ‘ಬುಚ್ಚಿ ಕತಾರ್‌ಗೆ ಚಿನ್ನದ ಮರ್ಡೋನ್ನ ಪ್ರತಿಮೆಯೊಂದಿಗೆ ಕತಾರ್ ಪ್ರವಾಸ’ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅವರ ಯಾತ್ರೆ ಭಟ್ಕಳ ತಲುಪಿದ್ದು, ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಬುಚ್ಚಿಯವರ ಯಾತ್ರೆಗೆ ಆದ್ದೂರಿ ಸ್ವಾಗತ ನೀಡಿದರು.

ಉದ್ಯಮಿ ಬುಚ್ಚಿ ಡ್ರಗ್ಸ್ ತ್ಯಜಿಸಿ, ಫುಟ್ಬಾಲ್ ಆಟವಾಡಿ ಎಂಬ ಮರ್ಡೋನಾ ಸಂದೇಶದ ಬಗ್ಗೆ ಮಾದಕ ವ್ಯಸನಿಗಳು ಮತ್ತು ಇತರ ಯುವಕರಲ್ಲಿ ಜಾಗೃತಿ ಮೂಡಿಸಲು ಮರ್ಡೋನಾ ಅವರ ಚಿನ್ನದ ಪುತ್ಥಳಿಯೊಂದಿಗೆ  ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣದ ಸಮಯದಲ್ಲಿ ಬುಚ್ಚಿ ಕಾಲೇಜ್ ಕ್ಯಾಂಪಸ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಈ ನಿಟ್ಟಿನಲ್ಲಿ ಸಂದೇಶವನ್ನು ಹರಡುವುದನ್ನು ಮುಂದುವರೆಸಿದ್ದಾರೆ.

ಭಟ್ಕಳ ತಲುಪುವ ಮುನ್ನ ರ‍್ಯಾಲಿಯು ಶಿರೂರಿ ಗ್ರೀನ್ ವ್ಯಾಲಿ ಶಾಲೆ ತಲುಪಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಕೆಲಸ ಮಾಡುವಂತೆ ಮನವಿ ಮಾಡಿತು. ಗ್ರೀನ್ ವ್ಯಾಲಿ ಪ್ರಿನ್ಸಿಪಾಲ್ ಮ್ಯಾಥ್ಯೂ ಮತ್ತು ಸಂಯೋಜಕ ವಿಲಾಲ್ ಮುನ್ಯಾ ಮ್ಯಾಥ್ಯೂ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 812 ಕಿ.ಮೀ ದೂರದ ಪ್ರಯಾಣಕ್ಕಾಗಿ ಮುಂಬೈಗೆ ವಿಶೇಷವಾಗಿ ಸಿದ್ಧಪಡಿಸಿದ ತೆರೆದ ರೈಡ್‌ನಲ್ಲಿ ಮರ್ಡೋನಾ ಪ್ರತಿಮೆಯನ್ನು ತೆಗೆದುಕೊಂಡು ಅಲ್ಲಿಂದ ವಿಮಾನದ ಮೂಲಕ ಕತಾರ್ ತಲುಪಿ ಪುಟ್ಬಾಲ್ ಫೈನಲ್ ಪಂದ್ಯವನ್ನು ಸೇರಲಿದ್ದಾರೆ.