ಅಪ್ಪು ಸಮಾಧಿ ದರ್ಶನಕ್ಕೆ ಹರಿದುಬಂತು ಜನಸಾಗರ: ಪುನೀತ್ ನೆನೆದು ಭಾವುಕರಾದ ಅಭಿಮಾನಿಗಳು

ಬೆಂಗಳೂರು: ಅಭಿಮಾನಿಗಳ ಪಾಲಿನ ದೇವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿರುವ ಕಂಠೀರವ ಸ್ಟುಡಿಯೋ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಬಂದಿದ್ದು, ಪುನೀತ್​​​ ಸಮಾಧಿ ದರ್ಶನಕ್ಕೆ ಜನ ಜಮಾಯಿಸಿದ್ದಾರೆ.

ನಾಡಿನ ಮೂಲೆ ಮೂಲೆಯಿಂದ ಅಪ್ಪು ಸಮಾಧಿ ಸ್ಥಳಕ್ಕೆ ಬರುತ್ತರೋ ಫ್ಯಾನ್ಸ್​, ಸಮಾಧಿ ದರ್ಶನ ಮಾಡಿ ಭಾವುಕರಾಗಿದ್ದಾರೆ. ಅಪ್ಪು ಸಮಾಧಿ ದರ್ಶನದ ಬಳಿಕ ವೃದ್ಧರೊಬ್ಬರು ಬಬ್ರುವಾಹನ ಸಿನಿಮಾ ಡೈಲಾಗ್ ಹೇಳಿದ್ದಾರೆ. ತುಮಕೂರು ಜಿಲ್ಲೆಯ ಬೈರಪ್ಪ ನಾಯಕ ಡೈಲಾಗ್ ಹೊಡೆದಿದ್ದು, ಸಮಾಧಿ ದರ್ಶನಕ್ಕೆ ಬೆಳಗ್ಗೆಯಿಂದ ಕಾಯ್ತಿದ್ದ ಭೈರಪ್ಪ ನಾಯಕ, ದರ್ಶನಕ್ಕೆ ಅವಕಾಶ ಕೊಡ್ತಿದ್ದಂತೆ ಪುನೀತ್ ಅಜರಾಮರ ಎಂದು ಜೈಘೋಷ ಕೂಗಿದ್ದಾರೆ. ಪುನೀತ್​​​​​​ ರಾಜ್​​ಕುಮಾರ್​​​​​​​​ ಆದರ್ಶ ನಮಗೆ ಸ್ಪೂರ್ತಿ ಎಂದಿದ್ದಾರೆ.

ಇನ್ನು ಸಮಾಧಿ ಸ್ಥಳದಲ್ಲಿ ಸಾಲು ನಿಂತು ಫ್ಯಾನ್ಸ್ ದರ್ಶನ ಪಡೆಯುತ್ತಿದ್ದಾರೆ.​ ಕಂಠೀರವ ಸ್ಟುಡಿಯೋ ಹೊರಗೆ ಪುನೀತ್​​​ ಕಟೌಟ್​ಗಳಿಗೆ ಬೃಹತ್​​ ಹಾರ ಹಾಕಲಾಗಿದೆ.