ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮುಂದುವರಿಕೆ

ಬೆಂಗಳೂರು: ದಸರಾ ಬಳಿಕ ಆರಂಭವಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಇಂದೂ ಕೂಡಾ ಮುಂದುವರೆದಿದೆ. ನಿನ್ನೆಯಿಂದ ಒತ್ತುವರಿ ತೆರವು ಕಾರ್ಯ ಶುರುವಾಗಿದ್ದು, ನಿನ್ನೆ ತೆರವು ಮಾಡಿದ ಸ್ಥಳಗಳಲ್ಲೇ ಇಂದು ಕಾರ್ಯ ಮುಂದುವರಿದಿದೆ. ಕೆ ಆರ್ ಪುರದ ಕ್ಲೈಬ್ರೀಡ್ಜ್ ಲೇಔಟ್ ನಲ್ಲಿ ನಿನ್ನೆ ಅಲ್ಪ ಪ್ರಮಾಣದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಶೆಡ್ ಗಳು ಕಾಂಪೌಂಡ್ ಗಳ ತೆರವು ಮಾಡಲಾಗಿತ್ತು.

ಇನ್ನು ಮಹದೇವಪುರ ಶೀಲವಂತ ಕೆರೆ ಬಳಿ ನಿನ್ನೆ ಅರ್ಧಕ್ಕೆ ನಿಲ್ಲಿಸಿದ್ದ ಒತ್ತುವರಿ ತೆರವು ಕಾರ್ಯ ಇಂದು ಮುಂದುವರಿಯಲಿದೆ. ಇನ್ನೂ ಒತ್ತುವರಿ ತೆರವು ವಿಚಾರದಲ್ಲಿ ಬಡವರ ಮನೆಯನ್ನೇ ಬಿಬಿಎಂಪಿ ಟಾರ್ಗೆಟ್ ಮಾಡುತ್ತಿದ್ದು, ಶ್ರೀಮಂತ ಮನೆ ಕಾಂಪೌಂಡ್ ಗಳ ಒತ್ತುವರಿ ತೆರವು ಕೇವಲ ಮಾತಿಗೆ ಸೀಮಿತವಾಯ್ತಾ.? ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.